ವಿಳಾಸ :   #147/4, 'ಲಕ್ಷ್ಮೀನಿವಾಸ', ಸಂಜಯನಗರ ಮೇನ್ ರೋಡ್, ಸಂಜಯನಗರ, ಬೆಂಗಳೂರು - 560094.

ರಾಷ್ಟ್ರ ಜಾಗೃತಿ ಅಭಿಯಾನ

ಸಂಘಟಿತ ಭಾರತ, ಸಮೃದ್ಧ ಭಾರತ

ಶುಭಾರಂಭ

75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನದಂದು (ಆ 15, 2021) ಕೆಲವು ಸಮಾನ ಮನಸ್ಕರು ಸೇರಿ ಸಾಧು-ಸಂತರ ಹಾಗೂ ಸಮಾಜದ ಗಣ್ಯರ ಸಲಹೆ ಸಹಕಾರ, ಮಾರ್ಗದರ್ಶನದಿಂದ ರಾಷ್ಟ್ರ ಜಾಗೃತಿ ಅಭಿಯಾನದ ಕಲ್ಪನೆಯ ಕೂಸು ಜನ್ಮ ತಾಳಿತು. ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಆನ್ ಲೈನ್ ನಲ್ಲೇ ಈ ಅಭಿಯಾನದ ಉದ್ಘಾಟನೆ ಹಾಗೂ ಚಾಲನೆ ನೆರವೇರಿತು.

ನಾವು ಮಾಡುತ್ತಿರುವುದಾದರೂ ಏನು?

ನಾವು ಆನ್ ಲೈನ್ ಗೀತಾ ಗಾಯನ ಸ್ಪರ್ಧೆಯನ್ನು - ಸೋಲೋ ಮತ್ತು ಸಮೂಹ - ಏರ್ಪಡಿಸುತ್ತಿದ್ದೇವೆ. ವಿವಿಧ ಪ್ರಕಾರದ, ಅಂದರೆ ದೇಶಭಕ್ತಿ ಗೀತೆ, ಭಕ್ತಿ ಗೀತೆ, ಮತ್ತಿತರ ಗೀತೆಗಳು ಸಾಹಿತ್ಯ ಮತ್ತು ಅದನ್ನು ಹಾಡುವ ರೀತಿ (ರಾಗ) ಯನ್ನು ಸ್ಪರ್ಧಿಗಳಿಗೆ ಮೊದಲೇ ಕಲಿಸುತ್ತೇವೆ. ಎಲ್ಲಾ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ವಾಗತವಿದೆ.

ವಿಜೇತರಿಗೆ ಪದಕಗಳಿಂದ ಕೂಡಿದ ಬಹುಮಾನ, ಹಾಗೂ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಕಳಿಸುತ್ತಿದ್ದೇವೆ. ಇಂತಹ ಸ್ಪರ್ಧೆಯನ್ನು ವರ್ಷದಲ್ಲಿ ಎರಡು ಬಾರಿ, ಅಂದರೆ ಗಣರಾಜ್ಯೋತ್ಸವ ಮತ್ತು ಸ್ವತಂತ್ರ ದಿನಾಚರಣೆಗಳಂದು ನಡೆಸುತ್ತಿದ್ದೇವೆ. ಕೇವಲ ಗೀತ ಗಾಯನಕ್ಕೆ ಸೀಮಿತವಾಗಿದ್ದ ನಮ್ಮ ಚಟುವಟಿಕೆ ಇದೀಗ ನೃತ್ಯ ಮತ್ತು ನಿರ್ದಿಷ್ಟ ವಿಷಯ ಕುರಿತ ಭಾಷಣ ಸ್ಪರ್ಧೆಗೂ ವಿಸ್ತರಿಸಿದೆ.

Thumb
ನಿರೀಕ್ಷೆ ಮೀರಿ ಪ್ರತಿಕ್ರಿಯೆ

138 ದೇಶಗಳು, 30 ರಾಜ್ಯಗಳನ್ನು ಒಳಗೊಂಡ ವಿವಿಧ ಭಾಷಿಕರೂ ಸೇರಿ ಒಟ್ಟು 1 ಕೋಟಿ 38 ಲಕ್ಷಕ್ಕೂ ಮೀರಿ (ವೆಬ್ ಸೈಟ್) ಮೂಲಕ ಭಾರತೀಯರು ಅಲ್ಲದೆ ಕೆಲವು ವಿದೇಶಿಯರೂ ಈ ಅಭಿಯಾನದಲ್ಲಿ ಸಹಭಾಗಿಗಳಾಗಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಗೀತ ಗಾಯನ, ನೃತ್ಯ ಮತ್ತು ನಿರ್ದಿಷ್ಟ ವಿಷಯ ಕುರಿತ ಭಾಷಣ ಸ್ಪರ್ಧೆಯಲ್ಲಿ 18566 ಸ್ಪರ್ಧಿಗಳು ಭಾಗವಹಿಸಿದ್ದಾರೆ.

2524 ಶಾಲೆಗಳು
1187 ತಲುಪಲು ಕಠಿಣವಾದ ಗ್ರಾಮೀಣ ಶಾಲೆಗಳು
512 ಭಜನಾ ಮಂಡಳಿಗಳು
257 ಪದವಿ ಪೂರ್ವ ಕಾಲೇಜುಗಳು
253 ಖಾಸಗಿ ಸಂಗೀತ ಪಾಠ ಕೇಂದ್ರಗಳು
176 ಖಾಸಗಿ ನೃತ್ಯ ಶಾಲೆಗಳು
29 ಇಂಜಿನಿಯರಿಂಗ್ ಕಾಲೇಜುಗಳು
17 ನರ್ಸಿಂಗ್ ಕಾಲೇಜುಗಳು
13 ಕಾನೂನು ಕಾಲೇಜುಗಳು
8 ಮೆಡಿಕಲ್ ಕಾಲೇಜುಗಳು
3 ವಿಶ್ವವಿದ್ಯಾಲಯಗಳು

ಸ್ಪರ್ಧೆಯಲ್ಲಿ ಸತತವಾಗಿ ಭಾಗವಹಿಸುತ್ತೇವೆ

ಇದೀಗ ನಾವು ಜಯಭೇರಿಯ 5ನೇ ವರ್ಷಕ್ಕೆ ಆಧಾರ್ಪಣೆ ಮಾಡುತ್ತಿದ್ದೇವೆ ಬೇರೆ ಯಾವುದೇ ಸೋಶಿಯಲ್ ಮೀಡಿಯಾಗಳ ನೆರವಿಲ್ಲದೆ ಸ್ವತಂತ್ರವಾದ ಇಂತಹ ಪ್ರಯತ್ನಕ್ಕೆ ಭಾರಿ ಜನಬೆಂಬಲ ವ್ಯಕ್ತವಾಗಿರುವುದು ದಾಖಲೆ ಸರಿ.

ನಮ್ಮ ಮುಂದಿನ ಗುರಿ

ನಮ್ಮ ದೇಶ, ಸಂಸ್ಕೃತಿ ಸಂವಿಧಾನಗಳ ಕುರಿತಾಗಿ ಭಾರತೀಯರೆಲ್ಲರಲ್ಲಿಯೂ ಜನಜಾಗೃತಿ ಮೂಡಿಸುವುದು. ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಕುರಿತು ಎಚ್ಚರಿಸುವುದು. ಇವೆಲ್ಲವನ್ನೂ ಭಾವಿ ಪೀಳಿಗೆಗೆ ಬಳುವಳಿಯಾಗಿ ನೀಡಿ ಸುಸಂಸ್ಕೃತ, ಸುರಕ್ಷಿತ, ಸಮೃದ್ಧ, ಸ್ವಾವಲಂಬಿ, ರಾಷ್ಟ್ರ ನಿರ್ಮಾಣ ಮಾಡುವುದು.

ಬನ್ನಿ ನೀವು ನಮ್ಮ ಜೊತೆಗೂಡಿ

ನೀವು ದೂರದಿಂದಲೇ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ ಸಾಲದು. ನಮ್ಮ ಜೊತೆ ಗೂಡಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಗಳಾಗಬೇಕೆಂದು ನಮ್ಮ ಅಪೇಕ್ಷೆ. ನಿಮ್ಮ ಸಲಹೆ ಮಾರ್ಗದರ್ಶನಗಳಿಗೂ ಮುಕ್ತ ಸ್ವಾಗತ. ಬನ್ನಿ ಈ ಆಂದೋಲನವನ್ನು ಇಮ್ಮಡಿ , ಮುಮ್ಮಡಿ,..... ನೂರ್ಮಡಿಯಾಗಿ ಬೆಳೆಸೋಣ.

10,000 ಜನರನ್ನು ಸಂಪರ್ಕಿಸಿ ಅವರಿಗೆ ಅತ್ಯಂತ ಸರಳ 3 ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಯಿತು

ರಾಷ್ಟ್ರ ಗೀತೆ ಯಾವುದು ಎಂಬ ಪ್ರಶ್ನೆಗೆ 2403 ಜನ ಮಾತ್ರ ಸರಿಯಾದ ಉತ್ತರ ಕೊಟ್ಟಿದ್ದರು.

ರಾಷ್ಟ್ರ ಗೀತೆ ಹಾಡಲು ಹೇಳಿದರೆ 68℅ ಜನ ನಿರಾಕರಿಸಿ ಇದರಿಂದ ಏನು ಲಾಭ, ಇತ್ಯಾದಿ ಮರು ಪ್ರಶ್ನೆ ಕೇಳಿದ್ದರು.

ರಾಷ್ಟ್ರ ಗೀತೆ ಹಾಡಿದ್ದವರು ಕೇವಲ 218 ಜನ, 12 ರಿಂದ 30 ವರ್ಷದ ವಯಸ್ಸಿನ ಅಂತರದವರು.

ಸಮಾನ ಮನಸ್ಕರ ವೇದಿಕೆ ಇದಾಗಿದೆ. ಸುಮಾರು 14 ವರ್ಷಗಳ ದಿಂದೆ ಕೀರ್ತಿಶೇಷ ಶ್ರೀ ಹರ್ಷಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮ, ಬೆಂಗಳೂರು. ಮತ್ತು ಕೀರ್ತಿಶೇಷ ಶ್ರೀ ನ. ಕೃಷ್ಣಪ್ಪನವರ ಸೂಚನೆಯಂತೆ ರಾಷ್ಟ್ರ ಗೀತೆ ಕುರಿತಾಗಿ ಸಮೀಕ್ಷೆಯ ಕಾರ್ಯ ನಡೆಸಲಾಯಿತು. ಸರಳ 3 ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಯಿತು

ಹಿರಿಯರಾದ ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ, ಕೀರ್ತಿ ಶೇಷ ಶ್ರೀ ಹರಿಭಾವು ವಝೆ ಮತ್ತು ಕೆಲವು ಗಣ್ಯರು ಹಿರಿಯರು. ಉಪಸ್ಥಿತಿಯಲ್ಲಿ ವರದಿಯ ವಿಷಯ ಚರ್ಚಿತವಾಯಿತು. ಶಾಲಾ ದಿನಗಳಲ್ಲಿ ಮಕ್ಕಳು ಕಲಿಯುತ್ತಾರೆ, ಹಾಡುತ್ತಾರೆ. ನಂತರದಲ್ಲಿ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಹೋಗುವ ವಾತಾವರಣವಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾರೋ ಒಬ್ಬರು ಹಾಡುತ್ತಾರೆ, ಉಳಿದವರು ಯಾಂತ್ರಿಕವಾಗಿ ನಿಲ್ಲುತ್ತಾರೆ. ಎದ್ದು ನಿಲ್ಲದೆ ಗೌರವ ಸೂಚಿಸದವರೂ ಕಾಣಸಿಗುತ್ತಾರೆ. ಹೀಗಾಗಿ ಜಾಗೃತಿ ಮೂಡಿಸುವ ಅಭಿಯಾನದ ಅಗತ್ಯತೆ ಇದೆಯೆಂಬ ಅಭಿಪ್ರಾಯ ಮೂಡಿಬಂದುದರ ಫಲವಾಗಿ ರಚಿತವಾದುದೇ ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿ ವೇದಿಕೆ.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನದಂದು
ಹಲವು ಚಟುವಟಿಕೆಗಳಿಗೆ ಚಾಲನೆ ಕೊಡಲಾಯಿತು.

ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ ಜಿ 75 ದೇಶಭಕ್ತಿ ಗೀತೆಗಳನ್ನು ಆಯ್ಕೆ ಮಾಡಿ ಸ್ಪರ್ಧೆ, ಸಮರ್ಪಣೆ, ಸಂವಾದ ಎಂಬ ಮಾರ್ಗಗಳ ಮೂಲಕ ಜನಜಾಗೃತಿ ಮೂಡಿಸಿ ಎಂದು ಅಭಿಪ್ರಾಯ ನೀಡಿದರು. ಕೀರ್ತಿಶೇಷ ಶ್ರೀ ಹರಿಭಾವು ವಝೆ ಸಮಿತಿಯ ಗುರಿ ನಮ್ಮ ದೇಶ, ನಮ್ಮ ಸಂವಿಧಾನ, ನಮ್ಮ ಸಂಸ್ಕೃತಿ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಭಾರತೀಯರೆಲ್ಲರಲ್ಲಿ ಜನಜಾಗೃತಿ ಮಾಡಿಸುವುದಾಗಿರಲಿ ಎಂದು ಸಲಹೆ ನೀಡಿದರು .

ಮೊದಲ ವರ್ಷ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 75 ದೇಶಗೀತೆಗಳ ಆನ್ ಲೈನ್ ಸ್ಪರ್ಧೆ ನಡೆಸಲಾಯಿತು. ಸುಮಾರು 32 ಲಕ್ಷಕ್ಕಿಂತಲೂ ಹೆಚ್ಚು ಜನರು ದೇಶ ವಿದೇಶಗಳಿಂದ ಹಾರೈಸಿ, ಆಶೀರ್ವದಿಸಿ, ಭಾಗವಹಿಸಿದರು. ಆಯ್ದ 75 ಗೀತೆಗಳನ್ನೂ ಹಾಡಿದ್ದವರಿಗೆ ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ ಜಿ ರವರ ಉಪಸ್ಥಿತಿಯಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಮೊದಲ ವರ್ಷದ ಸಮಾರೋಪ ಸಮಾರಂಭ ಆಯೋಜಿಸಿ ನಗದು ಬಹುಮಾನಗಳು ಮತ್ತು ಎಲ್ಲರಿಗೂ ಪ್ರಶಂಸನಾ ಪತ್ರಗಳನ್ನು ನೀಡಿ 12 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಯಿತು.

ರಾಷ್ಟ್ರ ಜಾಗೃತಿ ಅಭಿಯಾನದ ಸಹಯೋಗಿಗಳು

ರಾಷ್ಟ್ರೀಯ ಜಾಗೃತಿ ಮೂಡಿಸಲು ಹಲವು ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಈ ಅಭಿಯಾನದಲ್ಲಿ ಸಹಕರಿಸುತ್ತಿವೆ.