1 / 7

ಕೀರ್ತಿಶೇಷ

ಸ್ವಾಮಿ ಹರ್ಷಾನಂದ ಜಿ

ಕೀರ್ತಿಶೇಷ

ನ.ಕೃಷ್ಣಪ್ಪ ಜಿ

ಕೀರ್ತಿಶೇಷ

ಚಂದ್ರಶೇಖರ ಭಂಡಾರಿ ಜಿ

ಕೀರ್ತಿಶೇಷ

ಹರಿಭಾವು ವಝೆ ಜಿ

ಅಧ್ಯಕ್ಷರು ರಾ.ಜಾ.ಅ.ಸಮಿತಿ

Image of Justice N Kumar

ಜಸ್ಟಿಸ್ ಎನ್ ಕುಮಾರ್

ರಾಷ್ಟ್ರ ಜಾಗೃತಿ ಅಭಿಯಾನ

ಸಮಾನ ಮನಸ್ಕರ ವೇದಿಕೆ ಇದಾಗಿದೆ. ಸುಮಾರು 14 ವರ್ಷಗಳ ದಿಂದೆ ಕೀರ್ತಿಶೇಷ ಶ್ರೀ ಹರ್ಷಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮ, ಬೆಂಗಳೂರು. ಮತ್ತು ಕೀರ್ತಿಶೇಷ ಶ್ರೀ ನ. ಕೃಷ್ಣಪ್ಪನವರ ಸೂಚನೆಯಂತೆ ರಾಷ್ಟ್ರ ಗೀತೆ ಕುರಿತಾಗಿ ಸಮೀಕ್ಷೆಯ ಕಾರ್ಯ ನಡೆಸಲಾಯಿತು. ಸರಳ 3 ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಯಿತು


ಹಿರಿಯರಾದ ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ, ಕೀರ್ತಿ ಶೇಷ ಶ್ರೀ ಹರಿಭಾವು ವಝೆ ಮತ್ತು ಕೆಲವು ಗಣ್ಯರು ಹಿರಿಯರು. ಉಪಸ್ಥಿತಿಯಲ್ಲಿ ವರದಿಯ ವಿಷಯ ಚರ್ಚಿತವಾಯಿತು. ಶಾಲಾ ದಿನಗಳಲ್ಲಿ ಮಕ್ಕಳು ಕಲಿಯುತ್ತಾರೆ, ಹಾಡುತ್ತಾರೆ. ನಂತರದಲ್ಲಿ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಹೋಗುವ ವಾತಾವರಣವಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾರೋ ಒಬ್ಬರು ಹಾಡುತ್ತಾರೆ, ಉಳಿದವರು ಯಾಂತ್ರಿಕವಾಗಿ ನಿಲ್ಲುತ್ತಾರೆ. ಎದ್ದು ನಿಲ್ಲದೆ ಗೌರವ ಸೂಚಿಸದವರೂ ಕಾಣಸಿಗುತ್ತಾರೆ. ಹೀಗಾಗಿ ಜಾಗೃತಿ ಮೂಡಿಸುವ ಅಭಿಯಾನದ ಅಗತ್ಯತೆ ಇದೆಯೆಂಬ ಅಭಿಪ್ರಾಯ ಮೂಡಿಬಂದುದರ ಫಲವಾಗಿ ರಚಿತವಾದುದೇ ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿ ವೇದಿಕೆ.

10,000 ಜನರನ್ನು ಸಂಪರ್ಕಿಸಿ ಅವರಿಗೆ ಅತ್ಯಂತ ಸರಳ 3 ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಯಿತು

ರಾಷ್ಟ್ರ ಗೀತೆ ಯಾವುದು ಎಂಬ ಪ್ರಶ್ನೆಗೆ 2403 ಜನ ಮಾತ್ರ ಸರಿಯಾದ ಉತ್ತರ ಕೊಟ್ಟಿದ್ದರು.

ರಾಷ್ಟ್ರ ಗೀತೆ ಹಾಡಲು ಹೇಳಿದರೆ 68℅ ಜನ ನಿರಾಕರಿಸಿ ಇದರಿಂದ ಏನು ಲಾಭ, ಇತ್ಯಾದಿ ಮರು ಪ್ರಶ್ನೆ ಕೇಳಿದ್ದರು.

ರಾಷ್ಟ್ರ ಗೀತೆ ಹಾಡಿದ್ದವರು ಕೇವಲ 218 ಜನ, 12 ರಿಂದ 30 ವರ್ಷದ ವಯಸ್ಸಿನ ಅಂತರದವರು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಚಟುವಟಿಕೆಗಳಿಗೆ ಚಾಲನೆ ಕೊಡಲಾಯಿತು.

ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ ಜಿ 75 ದೇಶಭಕ್ತಿ ಗೀತೆಗಳನ್ನು ಆಯ್ಕೆ ಮಾಡಿ ಸ್ಪರ್ಧೆ, ಸಮರ್ಪಣೆ, ಸಂವಾದ ಎಂಬ ಮಾರ್ಗಗಳ ಮೂಲಕ ಜನಜಾಗೃತಿ ಮೂಡಿಸಿ ಎಂದು ಅಭಿಪ್ರಾಯ ನೀಡಿದರು. ಕೀರ್ತಿಶೇಷ ಶ್ರೀ ಹರಿಭಾವು ವಝೆ ಸಮಿತಿಯ ಗುರಿ ನಮ್ಮ ದೇಶ, ನಮ್ಮ ಸಂವಿಧಾನ, ನಮ್ಮ ಸಂಸ್ಕೃತಿ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಭಾರತೀಯರೆಲ್ಲರಲ್ಲಿ ಜನಜಾಗೃತಿ ಮಾಡಿಸುವುದಾಗಿರಲಿ ಎಂದು ಸಲಹೆ ನೀಡಿದರು .

ಮೊದಲ ವರ್ಷ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 75 ದೇಶಗೀತೆಗಳ ಆನ್ ಲೈನ್ ಸ್ಪರ್ಧೆ ನಡೆಸಲಾಯಿತು. ಸುಮಾರು 32 ಲಕ್ಷಕ್ಕಿಂತಲೂ ಹೆಚ್ಚು ಜನರು ದೇಶ ವಿದೇಶಗಳಿಂದ ಹಾರೈಸಿ, ಆಶೀರ್ವದಿಸಿ, ಭಾಗವಹಿಸಿದರು. ಆಯ್ದ 75 ಗೀತೆಗಳನ್ನೂ ಹಾಡಿದ್ದವರಿಗೆ ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ ಜಿ ರವರ ಉಪಸ್ಥಿತಿಯಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಮೊದಲ ವರ್ಷದ ಸಮಾರೋಪ ಸಮಾರಂಭ ಆಯೋಜಿಸಿ ನಗದು ಬಹುಮಾನಗಳು ಮತ್ತು ಎಲ್ಲರಿಗೂ ಪ್ರಶಂಸನಾ ಪತ್ರಗಳನ್ನು ನೀಡಿ 12 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಯಿತು.

ಎರಡನೇ ವರ್ಷಕ್ಕೆ ಸಾಮೂಹಿಕ ಗೀತ ಗಾಯನ ಸಮರ್ಪಣೆ ಮತ್ತು ಸ್ಪರ್ಧೆಗೆ ವಿಶೇಷವಾಗಿ 10 ಗೀತೆಗಳನ್ನು ಆಯ್ಕೆ ಮಾಡಿ ಸಾಹಿತ್ಯ, ಕಲಿಕಾ ಮಾದರಿ ದ್ವನಿಮುದ್ರಿಕೆ ಬಿಡುಗಡೆ ಮಾಡಲಾಯಿತು. ಗೀತೆಗಳ ಸಾಹಿತ್ಯದ ಪುಸ್ತಕ ಮೊದಲನೇ ಹೂಗುಚ್ಛ ಭಾಗ -1ಕ್ಕೆ ಸ್ವತಃ ಶ್ರೀ ಚಂದ್ರಶೇಖರ ಭಂಡಾರಿ ಜಿ ಮುನ್ನುಡಿ ಬರೆದುಕೊಟ್ಟು ಮುಕ್ತ ವೇದಿಕೆಯಲ್ಲಿ ಉಪಸ್ಥಿತರಿದ್ದು ದಿಕ್ಸೂಚಿ ಭಾಷಣ ಮಾಡಿ ಹರಸಿ ಆಶೀರ್ವದಿಸಿದ್ದರು. ಸಮಿತಿಯ ಅಧ್ಯಕ್ಷರಾಗಿ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರೀ ಎನ್. ಕುಮಾರ್ ಮತ್ತು ಗೌರವಾಧ್ಯಕ್ಷರಾಗಿ ಮೈಸೂರು ಸಂಸ್ಥಾನದ ರಾಜ ಮನೆತನದ ಶ್ರೀ ಯದುವೀರ್ ಒಡೆಯರ್ ರವರ ಮಾರ್ಗದರ್ಶನದಲ್ಲಿ ಸಮಿತಿಯ ಕಾರ್ಯ ಪ್ರಾರಂಭವಾಗಿದೆ. ಸಮಿತಿಯ ಕಾರ್ಯದರ್ಶಿಯಾಗಿ ಶ್ರೀ ಹೆಚ್. ಜಿ .ಚಂದ್ರಶೇಖರ, ಹೆಸರಾಂತ ಕೈಗಾರಿಕೋದ್ಯಮಿ ಮತ್ತು ಕೋಶಾದ್ಯಕ್ಷರಾಗಿ ಡಾll ಆರ್. ಎಲ್. ರಮೇಶ್ ಬಾಬು ಹೆಸರಾಂತ ಕೈಗಾರಿಕೋದ್ಯಮಿ ಕೈಜೋಡಿಸಿದ್ದಾರೆ, ಸಂಚಾಲಕರಾಗಿ ಶ್ರೀ ರವಿ ಹೊಯ್ಸಳ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈಗ ಹಿರಿಯರು ಕಿರಿಯರನ್ನು ಈ ರಾಷ್ಟ್ರ ಕಾರ್ಯದಲ್ಲಿ ಜೋಡಿಸುತ್ತಾ ಸಾಮಾಜಿಕ ಜಾಲತಾಣಗಳ ಮೂಲಕ 5 ಕೋಟಿ 13 ಲಕ್ಷ ಕ್ಕಿಂತಲೂ ಹೆಚ್ಚು ವೀಕ್ಷಕರುಗಳು ವಿಶ್ವದಾದ್ಯಂತ 133 ದೇಶಗಳಿಂದ ಮತ್ತು ಭಾರತದ 30 ರಾಜ್ಯಗಳಿಂದ ನಿರಂತರವಾಗಿ ಪ್ರೋತ್ಸಾಹ ನೀಡಿ ಹಾರೈಸಿ ನಮ್ಮ ಜೊತೆ ಕೈಜೋಡಿಸಿದ್ದಾರೆ.